ಶೃಂಗೇರಿ: ‘ಪರಮಾತ್ಮ ಎಂದರೆ ನಾವು ನುಡಿಯುವ ಸತ್ಯ. ಸತ್ಯದ ಆತ್ಮ ಮನುಷ್ಯನಿಗೆ ಮಾತ್ರ ಸೀಮಿತವಲ್ಲ. ಇಡೀ ಭೂಮಂಡಲದ ಸಕಲ ಜೀವರಾಶಿಗಳಿಗೂ ಇರುತ್ತದೆ. ಸತ್ಯದ ಆತ್ಮ ಅರಿಯಲು ನಾವು ಹೇಗೆ ನುಡಿಯಬೇಕು ಮತ್ತು ನಡೆದುಕೊಳ್ಳಬೇಕೆಂಬುವುದು ಎಲ್ಲಾ ಜೀವರಾಶಿಗಳಿಗೆ ಸಂಬಂಧಪಟ್ಟ ಅಂಶ’ ಎಂದು ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಹೇಳಿದರು.