ಚಿಕ್ಕಬಳ್ಳಾಪುರ: ತಾಲ್ಲೂಕಿನ ಕಳವಾರ ಬಳಿಯ ಪಾಪಾಗ್ನಿ ಮಠದಲ್ಲಿ ದಕ್ಷಿಣ ಕಾಶಿ ಪಂಚನಂದಿ ಮಹಾ ಪುಣ್ಯಕ್ಷೇತ್ರ ಪಾಪಾಗ್ನಿ ಮಠ ಚಾರಿಟಬಲ್ ಟ್ರಸ್ಟ್ ಮತ್ತು ವಿಶ್ವಕರ್ಮ ಸಂಘದಿಂದ ಗುರುವಾರ ಶರಭ ಯೋಗೇಂದ್ರಸ್ವಾಮಿ ಅವರ 308ನೇ ಆರಾಧನಾ ಮಹೋತ್ಸವ ಹಾಗೂ ವೀರ ಬ್ರಹ್ಮೇಂದ್ರಸ್ವಾಮಿ ಅವರ ರಥೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.