ಶಿವಮೊಗ್ಗ: ‘ನಮಗೆ ತಾಯಿ ಕಲಿಸಿದ ಭಾಷೆ ಸೃಜನಶೀಲ ಆಲೋಚನೆಗಳಿಗೆ ಪ್ರೇರಣೆಯಾಗುತ್ತದೆ. ಕಲಿಕೆ ಮತ್ತು ಜ್ಞಾನದ ವಿಚಾರದಲ್ಲಿ ಮಾತೃಭಾಷೆ ಹಾಗೂ ನಮ್ಮ ಪರಿಸರದ ಭಾಷೆ ಎರಡೂ ಮಹತ್ವದ ಪಾತ್ರ ವಹಿಸುತ್ತವೆ. ಭಾಷೆಯನ್ನು ಬಳಸದೆ ಹೋದರೆ ಬೆಳೆಯಲು ಸಾಧ್ಯವಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲ...